ಮಂದಾರ್ತಿ ಯಕ್ಷಗಾನ ಮೇಳದ ತಿರುಗಾಟ ಆರಂಭ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ನವ೦ಬರ್ 18 , 2014
|
ನವ೦ಬರ್ 18, 2014
|
ಮಂದಾರ್ತಿ ಯಕ್ಷಗಾನ ಮೇಳದ ತಿರುಗಾಟ ಆರಂಭ
ಮಂದಾರ್ತಿ :
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳ ಯಕ್ಷಗಾನ ಮೇಳದ ಈ ವರ್ಷದ ತಿರುಗಾಟ ಸೋಮವಾರ ಆರಂಭವಾಯಿತು. ದೇವಳದಲ್ಲಿ ಅರ್ಚಕ ಜಯರಾಮ ಪುರಾಣಿಕ ನೇತತ್ವದಲ್ಲಿ ಗಣಹೋಮ ಮತ್ತು ಐದೂ ಮೇಳಗಳ ಗಣಪತಿ ಪೂಜೆ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಶೆಟ್ಟಿ, ಮುಖ್ಯಕಾರ್ಯ ನಿರ್ವಹಣಾಕಾರಿ ಈ.ಜಿ. ನಾಯಕ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶೇಡಿಕೊಡ್ಲು ವಿಠಲ ಶೆಟ್ಟಿ, ಕೆ.ಪಿ. ಶೇಖರ್ ಪೂಜಾರಿ, ಸುರೇಂದ್ರ ಶೆಟ್ಟಿ, ಗಣೇಶ್ ಕುಂದರ್, ಶ್ರೀಪತಿ ಅಡಿಗ ಮತ್ತು ಸಿಬಂದಿ ವರ್ಗದವರು ಹಾಗೂ ಯಕ್ಷಗಾನ ಸೇವಾಕರ್ತರು ಉಪಸ್ಥಿತರಿದ್ದರು.
ಕೃಪೆ :
http://www.vijaykarnataka.com
|
|
|